ಯಾವ ಕೋರ್ಸ್, ಯಾವ ಕಾಲೇಜ್?

ಜಾನ್ ಒಬ್ಬ ಎಂಜಿನಿಯರಿಂಗ್ ಪಧವೀಧರ. ಸುಮಾರು ಎರಡು ವರ್ಷ ಭಾರತದಲ್ಲಿ ಕೆಲಸವನ್ನು ನಿರ್ವಹಿಸಿ, ಉನ್ನತ ಶಿಕ್ಷಣಕ್ಕಾಗಿ ಅಮೇರಿಕಗೆ ತೆರಳಿದ. ಅಲ್ಲಿ ಎಂ.ಎಸ್. ಮಾಡಿ ಹೆಚ್ಚಿನ ಪ್ರಾವೀಣ್ಯ ಪಡೆದು ತಾಯ್ನಾಡಿಗೆ ಆಶಾವಾದಿಯಾಗಿ ಮರಳಿದ.

ಆದರೆ ಜಾಗತೀಕರಣದ ಬೆಳವಣಿಗೆ ಮತ್ತು ತಂತ್ರಜ್ಞಾನದ ತೀರ್ವವಾದ ಬದಲಾವಣೆಗಳಿಂದ ಅವನ ವರ್ಗೀಕರಣದಲ್ಲಿದ್ದ ಸ್ಪೆಶಲೈeóÉೀಷನ್ ಬೇಡಿಕೆ ಕುಸಿಯಿತು. ಈಗ ಜಾನ್ ಉನ್ನತ ಶಿಕ್ಷಣ, ಅಚ್ಚುಕಟ್ಟಾದ ವ್ಯಕ್ತಿತ್ವವಿದ್ದರೂ, ಯೋಗ್ಯವಾದ ವೃತ್ತಿಯಿಲ್ಲದೆ, ಅತೃಪ್ತಿಯಿಂದ ಖಿನ್ನತೆಗೆ ಒಳಗಾಗಿದ್ದಾನೆ.

ಇದೀಗ ಎರಡನೇ ಪಿ.ಯು.ಸಿ.ಯಲ್ಲಿ ಉತ್ತೀರ್ಣನಾಗಿರುವ ರವಿ, ಬಿ.ಕಾಂ. ಪದವಿಗೆ ಸೇರಿದ್ದಾನೆ. ನೀನೇಕೆ ಬಿ.ಕಾಂ. ಆರಿಸಿಕೊಂಡೆ ಎಂದು ಪ್ರಶ್ನಿಸಿದಾಗ ಬಂದ ಉತ್ತರ, ‘ನಾನು ಗಣಿತದಲ್ಲಿ ಯಾವಾಗಲೂ ಹಿಂದೆ. ಆದ್ದರಿಂದ ಇದೇ ಸರಿಯಾದದ್ದೆಂದು ನಿರ್ಧರಿಸಿದೆ’.

ಇಂತಹ ತಪ್ಪುಗಳನ್ನೇ, ಅನೇಕ ವಿಧ್ಯಾರ್ಥಿಗಳು ಮಾಡುತ್ತಿರುವುದು ದೌರ್ಭಾಗ್ಯದ ಸಂಗತಿ. ಎಲ್ಲ ಸಂದರ್ಭಗಳಲ್ಲಿ ನೀವು ಆರಿಸಿಕೊಳ್ಳುವ ಕೋರ್ಸ್ ನಿಮ್ಮ ಅಭಿರುಚಿ ಮತ್ತು ಸಾಮಥ್ರ್ಯವನ್ನು ಅವಲಂಬಿಸಿರಬೇಕು; ನಿಮ್ಮ ದೌರ್ಬಲ್ಯಗಳಿಂದ ದೂರ ಸರಿಯುವುದರಲ್ಲಲ್ಲ. ಮುಖ್ಯವಾಗಿ, ನೀವು ಆರಿಸುವ ಕೋರ್ಸಿಗೆ ಸಂಬಂಧಿಸಿದ ವೃತ್ತಿಯ ಬಗ್ಗೆ-ಮಾರುಕಟ್ಟೆಯ ಬೇಡಿಕೆ, ತಂತ್ರಜ್ಞಾನದ ಬದಲಾವಣೆಗಳ ಸಾಧ್ಯತೆ, ಸವಾಲುಗಳು, ಉದ್ಯೋಗಾವಕಾಶಗಳು, ನಿಮಗೆ ಸಮಗ್ರವಾದ ಮಾಹಿತಿ ಇರಲೇಬೇಕು. ಇಲ್ಲದಿದ್ದರೆ ಜಾನ್‍ನಂತೆ ಎಡಬಿಡಂಗಿಯ ಪರಿಸ್ಥಿತಿಯಲ್ಲಿ ಸಿಕ್ಕಿಬೀಳಬಹುದು; ಜೀವನಪರ್ಯಂತ ನಿಮಗಿಷ್ಟವಿಲ್ಲದ ಉದ್ಯೋಗದಲ್ಲಿ ಒದ್ದಾಡುವಂತಾಗಬಹುದು. ಪ್ರಸಿದ್ಧ ಲೇಖಕ ಮತ್ತು ಉಪನ್ಯಾಸಕಾರ ಡೇಲ್ ಕಾರ್ನೆಗಿ ಹೇಳಿರುವಂತೆ, “ನೀವು ಮಾಡುವ ಕೆಲಸವನ್ನು ಮನಸಾರ ಇಚ್ಛಿಸದೆ ಇದ್ದರೆ, ನೀವು ನಿಜವಾದ ಯಶಸ್ಸನ್ನು ಗಳಿಸಲು ಸಾಧ್ಯವಿಲ್ಲ”

ಆದ್ದರಿಂದ, ಜಾಗರೂಕತೆಯಿಂದ ವೃತ್ತಿಜೀವನವನ್ನು ರೂಪಿಸಿಕೊಳ್ಳುವುದು ಹೇಗೆ?

ನಿಮ್ಮ ಸಾಮಥ್ರ್ಯ, ಆಸಕ್ತಿ ಮತ್ತು ಅಭಿರುಚಿಯನ್ನು ಅರಿಯಿರಿ

ಮೊದಲನೆಯದಾಗಿ, ನಿಮ್ಮನ್ನು ನೀವು ಅರಿತುಕೊಳ್ಳಿ. ಅಂದರೆ, ನಿಮಗೆ ಯಾವ ವಿಷಯದಲ್ಲಿ ಸಾಮಥ್ರ್ಯವಿದೆ? ನಿಮ್ಮ ಆಸಕ್ತಿ ಮತ್ತು ಅಭಿರುಚಿಗಳೇನು ಎಂದು ನಿಧಾನವಾಗಿ, ಎಚ್ಚರಿಕೆಯಿಂದ ಪರಿಶೀಲಿಸಿ. ಉದಾಹರಣೆಗೆ, ನೀವು ತಂತ್ರಜ್ಞಾನದಲ್ಲಿ ಪ್ರವೀಣರೇ? ಅಥವಾ ಗಣಿತದಲ್ಲಿ ಚತುರರೇ? ನಿಮಗೆ ನಾಯಕತ್ವದ ಶಕ್ತಿಯಿದೆಯೇ? ಅಥವಾ ಸಾಹಿತ್ಯ, ಸಂಗೀತದಲ್ಲಿ ನಿಮಗೆ ಅಸಾಧಾರಣ ಅಭಿರುಚಿಯಿದೆಯೇ? ಈ ರೀತಿ ನಿಮ್ಮನ್ನು ಅರಿತುಕೊಳ್ಳಲು ನಿಮ್ಮ ಕಾಲೇಜುಗಳಲ್ಲಿರುವ ಕೌಂಸೆಲರ್ಸ್‍ಗಳನ್ನು ಸಂಪರ್ಕಿಸಿ; ಅಥವಾ ಅಂತರ್ಜಾಲದಲ್ಲಿ ಅಭಿರುಚಿಯನ್ನು ಗುರುತಿಸುವ ಟೆಸ್ಟ್‍ಗಳ ಮೊರೆ ಹೋಗಿ.

ವೃತ್ತಿಜೀವನದ ಬಗ್ಗೆ ಸಂಶೋಧಿಸಿ

ನಿಮ್ಮ ಆಸಕ್ತಿ, ಅಭಿರುಚಿಯನ್ನು ಅರಿತ ನಂತರ ಆ ಬಗ್ಗೆ ತೀರ್ವವಾದ ಸಂಶೋಧನೆಯನ್ನು ಮಾಡಿ, ವೃತ್ತಿಯನ್ನು ಆರಿಸಿಕೊಳ್ಳುವ ಸಾಧ್ಯತೆಗಳಿವೆಯೇ ಎಂದು ಪರಿಶೀಲಿಸಿ. ನಿಮಗೆ ಕ್ರಿಕೆಟ್ ಅಥವಾ ಸಂಗೀತದ ಆಸಕ್ತಿಯಿರ¨Àಹುದು; ಆದರೆ ಈ ಹವ್ಯಾಸವನ್ನು ನಿಮ್ಮ ವೃತ್ತಿಯನ್ನಾಗಿ ಪರಿವರ್ತಿಸುವ ಶಕ್ತಿ, ನೈಪುಣ್ಯತೆ ನಿಮ್ಮಲ್ಲಿದೆಯೇ? ಅದಕ್ಕೂ ಹೆಚ್ಚಾಗಿ, ಅಂತಹ ಅವಕಾಶಗಳಿವೆಯೇ ಎಂದು ವಿಚಾರಿಸಿ. ಇದು ನಿಮ್ಮ ಜೀವನೋಪಾಯದ ವಿಚಾರ; 30-40 ವರ್ಷಗಳಷ್ಟು ಕಾಲ ನೀವು ಈ ವೃತ್ತಿಯನ್ನೇ ಅವಲಂಬಿಸಿ, ಜೀವನದಲ್ಲಿ ಏಳಿಗೆಯನ್ನು ಸಾಧಿಸಬಲ್ಲಿರಾ? ಬದುಕಿನ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿಭಾಯಿಸಬಲ್ಲಿರಾ?ಈ ಪ್ರಶ್ನೆಗಳಿಗೆ ಉತ್ತರ ಸುಲಭವಾಗಿ ಸಿಗದು. ಏಕೆಂದರೆ, ಜಾಗತೀಕರಣದ ನಂತರ, ವ್ಯಾಪಾರದ ಸ್ವರೂಪ ತೀರ್ವವಾಗಿ, ಕ್ಷಿಪ್ರವಾಗಿ ಬದಲಾಗುತ್ತಿದೆ. ಉದಾಹರಣೆಗೆ, ಇಂದು ಮಾಹಿತಿ ತಂತ್ರಜ್ಞಾನಕ್ಕೆ ಬೇಡಿಕೆ ಇದೆ; ಆದರೆ ನಿಮ್ಮ ಶಿಕ್ಷಣ ಮುಗಿಯುವ ವೇಳೆಗೆ, ಇದೇ ಬೇಡಿಕೆ ಇರುತ್ತದೆಯೆಂದು ಖಚಿತವಾಗಬೇಕು. ಈ ಬೇಡಿಕೆ ನೀವು ಬಯಸುವ ಪ್ರದೇಶ ಅಥವಾ ದೇಶದಲ್ಲಿದೆಯೇ ಎಂದು ಅರಿಯಿರಿ. ಈ ರೀತಿ, ನೀವು ಆರಿಸಿಕೊಳ್ಳುವ ಯಾವುದೇ ವೃತ್ತಿಯ ಬಗ್ಗೆ ಮೇಲೆ ಉಲ್ಲೇಖಿಸಿದಂತೆ, ಸಮಗ್ರ ಮಾಹಿತಿಯಿರಬೇಕು; ಗೆಲ್ಲುವ ಆತ್ಮವಿಶ್ವಾಸವಿರಬೇಕು. ಆಗಲೇ ನಿಮ್ಮ ಶಿಕ್ಷಣ ಮತ್ತು ವೃತ್ತಿಯ ಬಗ್ಗೆ ನಿರ್ಧರಿಸಲು ಸಾಧ್ಯ.

ನಿಮ್ಮ ಜೀವನದ ಧ್ಯೇಯಗಳನ್ನು ನಿಶ್ಚಯಿಸಿ

ನಿಮ್ಮ ವೃತ್ತಿ ಮತು ಖಾಸಗೀ ಜೀವನದ ಧ್ಯೇಯಗಳೇನು? ಶಿಕ್ಷಣದ ನಂತರದ ಬದುಕಿನ ನಿಮ್ಮ ಕನಸುಗಳೇನು? ಬದುಕಿಗೆ ಅತಿ ಮುಖ್ಯವಾದ, ಈ ಪ್ರಶ್ನೆಗಳ ಬಗ್ಗೆ ಚಿಂತಿಸಿ, ಉತ್ತರಗಳನ್ನು ಕಂಡುಕೊಳ್ಳಿ. ನಿಮ್ಮ ಕನಸುಗಳನ್ನು ನನಸಾಗಿಸಲು, ಸೂಕ್ತವಾದ ವೃತ್ತಿಯ ಬಗ್ಗೆ ನಿಶ್ಚಯಿಸಿ. ಯಶಸ್ಸಿನ ಹಾದಿಯಲ್ಲಿ, ವೈಯಕ್ತಿಕ ಬದುಕಿನ ಕನಸುಗಳೇ ನಿಮಗೆ ಪ್ರೇರಣೆಯಾಗಲಿ.

ಶಿಕ್ಷಣದ ಅವಶ್ಯಕತೆಗಳನ್ನು ತೀರ್ಮಾನಿಸಿ

ಯಾವ ವೃತ್ತಿಯೆಂದು ನಿಶ್ಚಯವಾದ ಮೇಲೆ, ಆ ವೃತ್ತಿಯಲ್ಲಿ ಮೇಲುಮಟ್ಟಕ್ಕೆ ತಲಪಲು, ಬೇಕಾಗುವ ವಿವಿಧ ಹಂತಗಳ ಕೋರ್ಸುಗಳ ಬಗ್ಗೆ ಯೋಚಿಸಿ. ಉದಾಹರಣೆಗೆ, ನೀವು ಉನ್ನತ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗುವ ಅಪೇಕ್ಷೆಯಿದ್ದರೆ, ಡಾಕ್ಟರೇಟ್ ಅವಶ್ಯಕತೆಯಿರುತ್ತದೆ. ಅಥವಾ, ನೀವು ಆರಿಸಿದ ವೃತ್ತಿಗೆ ಸಂಬಂಧಿಸಿದಂತೆ ಹೆಚ್ಚಿನ ಶಿಕ್ಷಣದ ಅವಶ್ಯಕತೆಯಿರಬಹುದು. ಶಿಕ್ಷಣದ ಎಲ್ಲಾ ಹಂತಗಳಿಗೆ ಬೇಕಾಗುವ ಹಣಕಾಸಿನ ಲೆಕ್ಕ ಹಾಕಿ, ಅದರ ವ್ಯವಸ್ಥೆಯ ಬಗ್ಗೆ ನಿಮ್ಮ ಆಪ್ತರೊಡನೆ ಸಮಾಲೋಚಿಸಿ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಿ

ಸಾಮಾನ್ಯವಾಗಿ ಎಂಜಿನಿಯರಿಂಗ್, ಎಂ.ಬಿ.ಎ. ಸೇರಿದಂತೆ ಅನೇಕ ಕೋರ್ಸುಗಳ ಪ್ರವೇಶ ನಿರ್ಧರಿಸಲು ಪರೀಕ್ಷೆ, ಚರ್ಚೆ, ಸಂದರ್ಶನಗಳಿರುತ್ತದೆ. ಆದ್ದರಿಂದ, ಈ ಪ್ರಕ್ರಿಯೆಯ ಸಂಪೂರ್ಣ ವಿವರಗಳನ್ನು ಅರಿಯಿರಿ. ಎಂ.ಬಿ.ಎ. ಮಾಡುವುದಾದರೆ, ನೀವು ಕ್ಯಾಟ್ ಅಥವಾ ಮ್ಯಾಟ್ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು. ಇದೇ ರೀತಿ ಎಂಜಿನಿಯರಿಂಗ್‍ಗೆ, ಜೆ.ಇ.ಇ. ಅಥವಾ ಸಿ.ಇ.ಟಿ. ಪರೀಕ್ಷೆಗಳಿಗೆ ತಯಾರಾಗಿ. ಇಂತಹ ಉನ್ನತ ಕೋರ್ಸ್‍ಗಳ ಪ್ರವೇಶಕ್ಕೆ ಎಲ್ಲಾ ಹಂತಗಳಲ್ಲಿ ಪೈಪೆÇೀಟಿಯಿರುವುದರಿಂದ, ನೀವು ಶ್ರಮಿಸುವುದರ ಜೊತೆಗೆ ಜಾಣ್ಮೆಯಿಂದ ತಯಾರಾಗಬೇಕಾಗುತ್ತದೆ. ಈ ಪರೀಕ್ಷೆಗಳಿಗೆ ತಯಾರಾಗಲು ಕೋಚಿಂಗ್ ಸಂಸ್ಥೆಗಳನ್ನು ಸೇರುವುದು ಉಪಯುಕ್ತ.

ಮಾರ್ಗದರ್ಶಕರ [ಮೆಂಟರ್] ನೆರವನ್ನು ಪಡೆಯಿರಿ

ಇಂದಿನ ಸ್ಪರ್ದಾತ್ಮಕ ಜಗತ್ತಿನಲ್ಲಿ ಯಶಸ್ವಿಯಾಗಲು, ನಿರಂತರವಾಗಿ ಅನುಭವಿಗಳ ಸಲಹೆ ಮತ್ತು ಮಾರ್ಗದರ್ಶನದ ಅಗತ್ಯವಿರುವುತ್ತದೆ. ಸಂಕೋಚವಿಲ್ಲದೆ ಈ ವಾಸ್ತವಾಂಶವನ್ನು ಒಪ್ಪಿಕೊಂಡು, ನಿಮ್ಮ ವೃತ್ತಿಗೆ ಪ್ರಸ್ತುತವಾದ ಮಾರ್ಗದರ್ಶಕರೊಂದಿಗೆ ಸಮಾಲೋಚಿಸಿ. ಈ ಮಾರ್ಗದರ್ಶಕರು ನಿಮ್ಮ ಕಾಲೇಜಿನ ಅಧ್ಯಾಪಕರಿರಬಹುದು; ಹೆತ್ತವರಿರಬಹುದು ಅಥವಾ ನಿಮ್ಮ ಬಂಧು, ಬಳಗದವರಿರಬಹುದು. ಅನುಭವಿ ಮಾರ್ಗದರ್ಶಕರು ನಿಮ್ಮ ಆಂತರಿಕ ಶಕ್ತಿಯನ್ನು ಗುರುತಿಸಿ, ನಿಮ್ಮ ಪ್ರಯತ್ನ, ಪರಿಶ್ರಮಗಳನ್ನು ಜೀವನದ ಧ್ಯೇಯಗಳತ್ತ ಕೇಂದ್ರೀಕರಿಸಿ, ನಿಮ್ಮ ಹಿಂದೆ ಒಂದು ಪ್ರಬಲ ಪ್ರಚೋದನಾ ಶಕ್ತಿಯಾಗಿರುತ್ತಾರೆ. ನಿಮ್ಮ ಕನಸುಗಳನ್ನು ನನಸಾಗಿಸಲು, ಸದಾ ನಿಮ್ಮೊಂದಿಗಿರುವ ಇಂತಹ ಮಾರ್ಗದರ್ಶಕರು ಅತ್ಯಾವಶ್ಯಕ.

ಕೋರ್ಸ್ ಮತ್ತು ಕಾಲೇಜುಗಳ ಅದ್ಯತೆಗಳನ್ನು ಪರಿಗಣಿಸಿ

ಮಾರ್ಗದರ್ಶಕರೊಂದಿಗೆ ಸಮಾಲೋಚನೆಯ ನಂತರ, ನಿಮಗೆ ಸೂಕ್ತವಾದ ಕೋರ್ಸ್ ಮತ್ತು ಕಾಲೇಜುಗಳ ಆಯ್ಕೆ ಮಾಡಿ. ಕೆಲವೊಮ್ಮೆ ನಿಮ್ಮ ಬಯಕೆಯಂತೆಯೇ ಪ್ರವೇಶ ಸಿಗುವುದಿಲ್ಲ; ಹಾಗಾದರೆ ನಿರಾಶರಾಗಬೇಡಿ. ನಿಮ್ಮ ಅಯ್ಕೆಗಳ ಆದ್ಯತೆಗಳೇನೆಂದು-ಇವು ಕೋರ್ಸುಗಳಿರಬಹುದು, ಸ್ಪೆಶಲೈಜೇಶನ್ ಇರಬಹುದು, ಕಾಲೇಜುಗಳಿರಬಹುದು, ನೀವು ಮೊದಲೇ ನಿಶ್ಚಯಿಸಿದ್ದರೆ, ಈ ಪೇಚಾಟದಿಂದ ಪಾರಾಗಬಹುದು. ನಿಮ್ಮ ಆದ್ಯತೆಗಳನ್ನು ನಿಶ್ಚಯಿಸುವ ಮುನ್ನ ಕಾಲೇಜಿನ ಸಂಪನ್ಮೂಲಗಳು, ಅಧ್ಯಾಪಕ ವರ್ಗ, ನೇಮಕಾತಿ ಪ್ಲೇಸ್‍ಮೆಂಟ್ ಮಾಹಿತಿ, ಗ್ರಂಥಾಲಯ, ಶುಲ್ಕಗಳು, ಇತ್ಯಾದಿಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಸಂಗ್ರಹಿಸಿ ವಿಶ್ಲೇಷಿಸಿ. ನಿಮ್ಮ ಆಯ್ಕೆಗಳ ಹಿಂದೆ ಮಾರ್ಗದರ್ಶಕರ ಬೆಂಬಲ ಮತ್ತು ವಿಶ್ಲೇಷಣೆಯ ಸಮರ್ಥನೆಯಿರಬೇಕು; ಆಗಲೇ ನೀವು ಸರಿಯಾದ ಹಾದಿಯಲ್ಲೀದ್ದೀರೆಂದು ಖಚಿತ.ನೀವು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವ ಅಭಿಲಾಶೆಯಿದ್ದರೆ, ಪ್ರವೇಶದ ನಿಯಮಾವಳಿಗಳು, ಪ್ರವೇಶ ಪರೀಕ್ಷೆಗಳು, ವೀಸ ನಿಬಂಧನೆಗಳು, ಕೋರ್ಸ್ ಶುಲ್ಕಗಳು, ಹಾಸ್ಟೆಲ್ ಖರ್ಚು, ಇತ್ಯಾದಿಗಳ ಬಗ್ಗೆ ಪೂರ್ಣಶೋಧನೆ ಮಾಡಿಯೇ ನಿರ್ಧರಿಸಿ.

ತರಬೇತಿಯ [ಟ್ರೈನಿಂಗ್] ಅವಶ್ಯಕತೆಗಳ ಬಗ್ಗೆ ಯೋಚಿಸಿ

ಹಾಗೆಯೇ, ಶಿಕ್ಷಣ ಮತ್ತು ವೃತ್ತಿಯ ಸಲುವಾಗಿ ನಿಮಗೆ ಹೆಚ್ಚಿನ ತರಬೇತಿಯ ಅಗತ್ಯವಿದೆಯೇ ಎಂದು ಯೋಚಿಸಿ. ಉದಾಹರಣೆಗೆ, ನೀವು ಉನ್ನತ ವ್ಯಾಸಂಗಕ್ಕಾಗಿ ಜರ್ಮನಿಗೆ ಹೋಗುವುದಾದರೆ, ಅದಕ್ಕೆ ಮುನ್ನ ಸ್ವಲ್ಪ ಜರ್ಮನ್ ಭಾಷೆಯನ್ನು ಕಲಿಯುವುದು ಸಮಂಜಸ. ನೀವು ಮಾರ್ಕೆಟಿಂಗ್ ವೃತ್ತಿಯಲ್ಲಿ ಆಸಕ್ತರಿದ್ದರೆ, ನಿಮ್ಮ ವ್ಯಕ್ತಿತ್ವದ ವಿಕಾಸಕ್ಕೆ ಸಂಬಂಧಿಸಿದ ತರಬೇತಿ ಅಮೂಲ್ಯ. ಮುಖ್ಯವಾಗಿ, ಶಿಕ್ಷಣ ಮತ್ತು ತರಬೇತಿ, ನಿಮ್ಮ ಸರ್ವತೋಮುಖ ಪ್ರಗತಿಗೆ ಪೂರಕವಾಗಿರಲಿ.

ಪ್ರಯತ್ನಗಳನ್ನು ಕೇಂದ್ರೀಕರಿಸಿ

10ನೇ ತರಗತಿಯ ನಂತರ, ಸ್ನಾತಕೋತ್ತರ ಪಧವಿಯವರೆಗೆ ಏಳು ವರ್ಷಗಳ ವಿಧ್ಯಾಭ್ಯಾಸವಿರುತ್ತದೆ . ಈ ಅವಧಿಯಲ್ಲಿ ಸವಾಲುಗಳನ್ನು, ಕಷ್ಟಗಳನ್ನು ಎದುರಿಸುವ ಛಲ, ದೃಢತೆ ಮತ್ತು ಗೆಲ್ಲುವ ಆಶಾಭಾವನೆಗಳನ್ನು ಹೊಂದಿರಬೇಕು. ಯೌವನದ ದಿನಗಳಲ್ಲಿ, ಕಾಲೇಜಿನ ವಿನೋದ, ಆಟ, ಕೀಟಲೆಗಳ ನಡುವೆ, ನಿಮ್ಮ ಜೀವನದ ಧ್ಯೇಯಗಳÀ ಬಗ್ಗೆ ಸದಾ ದೃಷ್ಟಿಯಿರಲಿ.

ಜೀವನದ ಆದ್ಯತೆಗಳಲ್ಲಿ ಸಮತೋಲನವಿರಲಿ

ಶಿಕ್ಷಣ ಮುಗಿಸಿ ಕೆಲಸಕ್ಕೆ ಸೇರಿದ ನಂತರವೂ, ವೃತ್ತಿಯ ಮೇಲಿನ ಆದ್ಯತೆ ನಿರಂತರವಾಗಿರಲಿ. ವೃತ್ತಿ ಮತ್ತು ಖಾಸಗೀ ಬದುಕಿನಲ್ಲಿ ಸಮತೋಲನವಿರಬೇಕು. ಖಾಸಗೀ ಜೀವನ ಸುಖಕರವಾಗಿರಬೇಕಾದರೆ, ನೀವು ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸಬೇಕು; ಆಗಲೇ ಜೀವನದ ಎಲ್ಲಾ ಸಂಪತ್ತು, ತೃಪ್ತಿ ನಿಮ್ಮದಾಗಬಲ್ಲದು.

ಶಿಕ್ಷಣದ ಪ್ರಾಮುಖ್ಯತೆಯನ್ನು ವಿಧ್ಯಾರ್ಥಿಗಳೂ, ಹೆತ್ತವರೂ ಅರಿತು, ಮುಕ್ತ ಮನಸ್ಸಿನಿಂದ ಚರ್ಚಿಸಿ, ವೃತ್ತಿಜೀವನದ ಆಯ್ಕೆಯನ್ನು ನಿರ್ಧರಿಸಬೇಕು. ಸಾಮಾನ್ಯವಾಗಿ ವಿಧ್ಯಾರ್ಥಿಗಳು 9ನೇ ತರಗತಿಯಲ್ಲಿರುವಾಗಲೇ, ಈ ವಿಷಯದ ಮಹತ್ವವನ್ನು ಅರಿಯಬೇಕು; ಇದನ್ನು ಅವರಿಗೆ ಮನದಟ್ಟು ಮಾಡುವ ಜವಾಬ್ದಾರಿಯೂ ಹೆತ್ತವರದ್ದಾಗಿರುತ್ತದೆ. ಏಕೆಂದರೆ, 10ನೇ ತರಗತಿ ಮತ್ತು 12ನೇ ತರಗತಿಗಳ ಫಲಿತಾಂಶ ಅತ್ಯಂತ ಮಹತ್ವಪೂರ್ಣದ್ದು ಮತ್ತು ಶಿಕ್ಷಣದ ಎಲ್ಲ ಹಂತಗಳಲ್ಲೂ ಇದರ ಪರಿಗಣನೆಯಾಗುತ್ತದೆ.

ಶಿಕ್ಷಣ ಜೀವನದ ಬೆಳಕು. ಸ್ವಾಮೀ ವಿವೇಕಾನಂದ ಅವರು ಹೇಳಿದಂತೆ, “ಶಿಕ್ಷಣ ನಮ್ಮ ಚಿಂತನೆಗಳಿಗೆ ಆಹಾರ ನೀಡುವುದಲ್ಲದೆ, ಅವುಗಳಿಗೆ ಹಾರಲು ರೆಕ್ಕೆಗಳನ್ನು ನೀಡುತ್ತದೆ”. ವಿಧ್ಯಾರ್ಥಿಗಳಾದ ನೀವು ಸಾಧನೆಯ ಮೆಟ್ಟಿಲುಗಳನ್ನು ಏರಬೇಕಾದರೆ, ನಿಮ್ಮ ಮುಂದಿನ ಬದುಕು ಸಂಪಧ್ಭರಿತವಾಗಿ, ಸಾರ್ಥಕವಾಗಬೇಕಾದರೆ, ನಿಮ್ಮ ಶಿಕ್ಷಣದ ರೂಪುರೇಷೆಯನ್ನು ನೀವೇ ಯೋಜಿಸಿ; ನಿಮ್ಮ ಉಜ್ವಲ ಭವಿಷ್ಯದ ರೂವಾರಿ ನೀವೇ.

Download PDF document

                           

About author View all posts Author website

V Pradeep Kumar

Leave a Reply

Your email address will not be published. Required fields are marked *